Surprise Me!

ಕಾಶೀನಾಥ್ ರನ್ನ ನೆನೆದು ಕಂಬನಿ ಮಿಡಿದ ನಟ ಶಿವ ರಾಜ್ ಕುಮಾರ್ | Filmibeat Kannada

2018-01-18 1,603 Dailymotion

ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ಕಾಶಿನಾಥ್ ಇಂದು ಬೆಳಗ್ಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕಾಶಿನಾಥ್ ಅವರ ಅಂತಿಮ ದರ್ಶನ ಪಡೆದ ನಟ ಶಿವರಾಜ್ ಕುಮಾರ್, "ಕಾಶಿನಾಥ್ ಅವರ ನಿರ್ದೇಶನದಲ್ಲಿ ಅಭಿನಯಿಸುವ ಆಸೆ ಇತ್ತು. <br /> <br />ಅವರ ಧ್ವನಿಯಲ್ಲಿ ಒಂದು ಇನ್ನೊಸೆನ್ಸ್ ಇತ್ತು. ಒಳ್ಳೆಯ ನಟ, ನಮ್ಮ ಇಂಡಸ್ಟ್ರಿಗೆ ತುಂಬಾ ಬೇಕಾದವರು. ಭೇಟಿ ಆದ ಸಂದರ್ಭದಲ್ಲಿ ಪ್ರೀತಿ ವಿಶ್ವಾಸದಿಂದ ಇರುತ್ತಿದ್ದರು. ಚಿತ್ರರಂಗದ ಲೆಜೆಂಡ್... ಅವರನ್ನ ನಾವು ಕಳೆದುಕೊಂಡಿದ್ದೇವೆ" ಎಂದರು. <br /> <br />ಸದ್ಯ ಎನ್.ಆರ್.ಕಾಲೋನಿಯ ಎ.ಪಿ.ಎಸ್ ಕಾಲೇಜು ಮೈದಾನದಲ್ಲಿ ಕಾಶಿನಾಥ್ ಅವರ ಅಂತಿಮ ದರ್ಶನಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿದೆ. ಚಿತ್ರರಂಗದ ಗಣ್ಯರು ಮತ್ತು ಅಭಿಮಾನಿಗಳು ಎನ್.ಆರ್.ಕಾಲೋನಿಯಲ್ಲಿ ಕಾಶಿನಾಥ್ ಅವರ ಅಂತಿಮ ದರ್ಶನ ಪಡೆಯಬಹುದಾಗಿದೆ. <br /> <br />ಚಾಮರಾಜಪೇಟೆಯ ಟಿ.ಆರ್.ಮಿಲ್ ನಲ್ಲಿ ಅಂತ್ಯಸಂಸ್ಕಾರ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. <br /> <br />ಕಾಶಿನಾಥ್ ಅವರ ಪುತ್ರಿ ಅಮೃತವರ್ಷಿಣಿ ದುಬೈನಲ್ಲಿ ವಾಸವಾಗಿದ್ದು ಪುತ್ರಿ ಬೆಂಗಳೂರಿಗೆ ತಲುಪಿದ ನಂತರ ಅಂತಿಮ ವಿಧಿವಿಧಾನ ನಡೆಯಲಿದೆ. <br /> <br />Kannada Actor Shivaraj Kumar visited Sri Shankara Cancer Hospital and expressed his condolences to Kashinath.

Buy Now on CodeCanyon